Gali Somashekar Reddy
@galisomashekar
|| ಜನಸೇವಕ || ಭಾರತೀಯ || BJP || MLA, Ballari City || Government of Karnataka ||
ID:1570676640447107072
16-09-2022 07:31:22
1,0K Tweets
231 Followers
11 Following
ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು.
ತಂತ್ರಜ್ಞಾನಗಳು ಜೀವನದ ಚಟುವಟಿಕೆಗಳನ್ನು ಸರಳಗೊಳಿಸಿ ನೆರವು ನೀಡುತ್ತವೆ. ತಂತ್ರಜ್ಞಾನ ಕ್ಷೇತ್ರದ ಅಗಾಧ ಬೆಳವಣಿಗೆ ದೇಶದ ಅಭಿವೃದ್ಧಿಗೆ ಕೂಡ ಪೂರಕ. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಈ ದಿನ ಧನ್ಯವಾದ ಸಲ್ಲಿಸೋಣ.
#NationalTechnologyDay
ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿ, ನನ್ನ ಪರ ಮತ ನೀಡಿದ ಎಲ್ಲಾ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
#KarnatakaElections
BJP Karnataka
ಇಂದು ನನ್ನ ಧರ್ಮಪತ್ನಿ ಹಾಗೂ ಪುತ್ರರೊಂದಿಗೆ ಬಳ್ಳಾರಿಯ ಮತಗಟ್ಟೆಯಲ್ಲಿ ಮತದಾನ ಮಾಡಿ ನನ್ನ ಹಕ್ಕು ಚಲಾಯಿಸಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ನೀವೂ ಎಲ್ಲರೂ ತಪ್ಪದೇ ಮತದಾನ ಮಾಡಿ.
#KarnatakaAssemblyElection2023
ಸ್ವಾತಂತ್ರ್ಯ ಪೂರ್ವದಲ್ಲೇ ಬಲಿಷ್ಠ ದೇಶ ನಿರ್ಮಾಣಕ್ಕಾಗಿ ಹಾಗೂ ಉತ್ತಮ ಸಮಾಜಕ್ಕಾಗಿ ದುಡಿದ ನೇತಾರ, ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜಯಂತಿಯಂದು ಸಾವಿರ ಪ್ರಣಾಮಗಳು. ಬ್ರಿಟಿಷರ ದೌರ್ಜನ್ಯದ ಆಡಳಿತದ ವಿರುದ್ಧ ನಿಂತು ಹೋರಾಡುವಲ್ಲಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಅವರು ನೀಡಿದ ಕೊಡುಗೆ ಸ್ಮರಣೀಯ.
#GopalakrishnaGokhale
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಜೈನ್ ಮಾರುಕಟ್ಟೆಯಲ್ಲಿ, ಸನ್ಮಾನ್ಯ ಸಚಿವರಾದ ಶ್ರೀರಾಮುಲು ಅವರೊಂದಿಗೆ ರೋಡ್ ಶೋ ನಡೆಸಿ, ಬಿಜೆಪಿಯ ಜನಪರ ಯೋಜನೆಗಳ ಬಗ್ಗೆ ತಿಳಿಸಲಾಯಿತು. ಈ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವದಿಸಲು ಕೋರಲಾಯಿತು.
ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
#ಬಿಜೆಪಿಯೇಭರವಸೆ
BJP Karnataka
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಎಪಿಎಂಸಿ ಸರ್ಕಲ್ ನಲ್ಲಿ ಸನ್ಮಾನ್ಯ ಸಚಿವರಾದ ಶ್ರೀರಾಮುಲು ಅವರೊಂದಿಗೆ ರೋಡ್ ಶೋ ನಡೆಸಿ, ಬಿಜೆಪಿಯ ಸಾಧನೆಗಳನ್ನು ತಿಳಿಸಲಾಯಿತು. ಈ ಚುನಾವಣೆಯಲ್ಲಿ ಬೆಂಬಲಿಸಲು ಕೋರಲಾಯಿತು.
ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
#ಬಿಜೆಪಿಯೇಭರವಸೆ
B Sriramulu (Modi Ka Parivar) BJP Karnataka
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶ್ರೀರಾಂಪುರ ಕಾಲೋನಿಯಲ್ಲಿ ಸನ್ಮಾನ್ಯ ಸಚಿವರಾದ ಶ್ರೀರಾಮುಲು ಅವರೊಂದಿಗೆ ರೋಡ್ ಶೋ ನಡೆಸಿ ಬೆಂಬಲ ಕೋರಲಾಯಿತು.
ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
#ಬಿಜೆಪಿಯೇಭರವಸೆ
B Sriramulu (Modi Ka Parivar) BJP Karnataka
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಾಪೂಜಿ ನಗರ ಹಾಗೂ ಕನೇಕಲ್ ಬಸ್ ಸ್ಟಾಪ್ ಸರ್ಕಲ್ ಬಳಿ ಸನ್ಮಾನ್ಯ ಸಚಿವರಾದ ಶ್ರೀರಾಮುಲು ಅವರೊಂದಿಗೆ, ರೋಡ್ ಶೋ ನಡೆಸಿ ಮತ ಯಾಚನೆ ಮಾಡಲಾಯಿತು. ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.
#ಬಿಜೆಪಿಯೇಭರವಸೆ
B Sriramulu (Modi Ka Parivar) BJP Karnataka
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ದೇವಿನಗರದಲ್ಲಿ ಸನ್ಮಾನ್ಯ ಶ್ರೀರಾಮುಲು ಅವರು, ರೋಡ್ ಶೋ ಮೂಲಕ ನನ್ನ ಪರವಾಗಿ ಮತ ಯಾಚನೆ ಮಾಡಿದರು. ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.
B Sriramulu (Modi Ka Parivar) BJP Karnataka
ಇಂದು ಬಳ್ಳಾರಿಯ 32 ನೇ ವಾರ್ಡಿನ ದಯಕೇಂದ್ರ ಹಾಗೂ 31 ನೇ ವಾರ್ಡಿನ ಕೆ. ಸಿ ಕೊಂಡಯ್ಯ ನಗರ ಪ್ರದೇಶದಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಲಾಯಿತು. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಅರಿವು ಮೂಡಿಸಿ ಮತ ಯಾಚನೆ ಮಾಡಲಾಯಿತು. ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
BJP Karnataka
ಇಂದು ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಾಯಿತು. ಸ್ಥಳೀಯ ಮುಖಂಡರು ಹಾಜರಿದ್ದರು.
BJP Karnataka
ಇಂದು ವಾರ್ಡ್ 16 ರಲ್ಲಿ , ಶ್ರೀರಾಂಪುರ ಕಾಲೋನಿಯಲ್ಲಿ ಮತ ಯಾಚನೆ ಮಾಡಿದರು. ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಮಾಹಿತಿ ನೀಡಿ ಅಭಿವೃದ್ಧಿಗೆ ಬೆಂಬಲ ನೀಡುವವಂತೆ ಮನವಿ ಮಾಡಿದರು.
BJP Karnataka
ಇಂದು ಬಳ್ಳಾರಿಯ 5 ವಾರ್ಡಿನ ಇಂದ್ರನಗರ, ಬಳ್ಳಾರಪ್ಪ ಕಾಲೋನಿ, ವಾರ್ಡ್ ಬಂಡಿಮೋಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಅರಿವು ಮೂಡಿಸುವ ಮೂಲಕ ಜನ ಬೆಂಬಲ ಕೋರಲಾಯಿತು. ಸ್ಥಳೀಯ ಮುಖಂಡರು ಜೊತೆಗಿದ್ದರು.
#BJPYeBharavase BJP Karnataka
ಬಳ್ಳಾರಿಯ 9 ನೇ ವಾರ್ಡ್ ನ ಮಣಿಕಂಠ ನಗರ, ವೆಂಕಟರಮಣ ಕಾಲೋನಿ ಹಾಗೂ ಜನತಾ ನಗರದಲ್ಲಿ ನಿನ್ನೆ ಚುನಾವಣಾ ಪ್ರಚಾರ ಮಾಡಲಾಯಿತು. #ಡಬಲ್_ಇಂಜಿನ್_ಸರ್ಕಾರ ದ ಜನಪ್ರಿಯ ಯೋಜನೆಗಳನ್ನು ತಿಳಿಸಲಾಯಿತು.
ಮುಖಂಡರಾದ ಬಸವರಾಜ್, ಸರ್ಮಸ್, ಶಶಿಕಲಾ, ಕಾರ್ಯಕರ್ತರು ಭಾಗವಹಿಸಿದ್ದರು.
#ಬಿಜೆಪಿಯೇಭರವಸೆ
BJP Karnataka
ಭಾರತೀಯರ ಮನಸ್ಸಲ್ಲಿ ಸದಾ ನೆಲೆಸಿರುವ ಜ್ಞಾನಿ, ದಾರ್ಶನಿಕ, ರಾಷ್ಟ್ರಗೀತೆಯ ರಚನೆಕಾರ, ನೊಬೆಲ್ ಪುರಸ್ಕೃತ ಸಾಹಿತಿ, ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಜಯಂತಿಯಂದು ಸಾವಿರ ನಮನಗಳು. ಸಾಂಸ್ಕೃತಿಕ ಲೋಕದ ಸಿರಿವಂತಿಕೆ ಹೆಚ್ಚಿಸಲು ಅವರು ಸ್ಮರಣೀಯ ಕೊಡುಗೆ ನೀಡಿದ್ದಾರೆ.
#RabindranathTagore
ಬಳ್ಳಾರಿಯಲ್ಲಿ ಅಖಿಲ ಕರ್ನಾಟಕ ಲಾಳಗೊಂಡರ ಸಂಘದ ಕಚೇರಿಗೆ ಭೇಟಿ ನೀಡಿ ಬೆಂಬಲ ಕೋರಲಾಯಿತು. ಮಲ್ಲನಗೌಡ, ಕವಿತಾ, ಅಶೋಕ್, ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.
BJP Karnataka B Sriramulu (Modi Ka Parivar)
ಬಳ್ಳಾರಿಯ ವಾರ್ಡ್ 9, ಮಿಲ್ಲರ್ಪೇಟೆ ಹಾಗೂ ಸೊಸೈಟಿ ರೈಸ್ ಮಿಲ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಹಲವರು ಬಿಜೆಪಿಗೆ ಸೇರಿದರು. ಅವರಿಗೆ ಸ್ವಾಗತ ಕೋರಲಾಯಿತು.
ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
#ಬಿಜೆಪಿಯೇಭರವಸೆ
BJP Karnataka